ಹಾವೇರಿ ಜಿಲ್ಲೆಯ ರೈತರಿಗಾಗಿ 2025-26ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ವಿಮೆ ನೋಂದಣಿ (Haveri Hingaru Bele Vime) ಪ್ರಕ್ರಿಯೆಯನ್ನು ಸರ್ಕಾರ ಅಧಿಕೃತವಾಗಿ ಆರಂಭಿಸಿದೆ. ಈ ಕುರಿತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರು ಮಾಹಿತಿ ನೀಡಿದ್ದಾರೆ.
‘ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’ ಅಡಿ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಹೋಬಳಿ ಮಟ್ಟದ ಪ್ರಮುಖ ಬೆಳೆಗಳನ್ನು ಒಳಗೊಂಡAತೆ ಈ ಬಾರಿ ಯೋಜನೆಯನ್ನು ಹೆಚ್ಚು ವ್ಯಾಪಕವಾಗಿ ಜಾರಿಗೆ ತರಲು ನಿರ್ಧರಿಸಿದೆ.
ಇದನ್ನೂ ಓದಿ: Haveri Three MLAs Secret Meeting- ಹಾವೇರಿ ಮೂವರು ಶಾಸಕರ ಡಿಕೆಶಿ ಭೇಟಿಯ ಹಕೀಕತ್ ಏನು? ಮಂತ್ರಿಗಿರಿಗಾಗಿ ಹಕ್ಕೊತ್ತಾಯ!
ಆಪತ್ತಿಗೆ ನೆರವಾಗುವ ವಿಮೆ
ರೈತರು ಬೆಳೆ ವಿಪತ್ತು, ಅನಿಶ್ಚಿತ ಮಳೆ, ನೀರಾವರಿ ಕೊರತೆ, ಕಾಯಿಲೆ-ಕೀಟಗಳು, ಅತಿವೃಷ್ಟಿ ಮುಂತಾದ ಕಾರಣಗಳಿಂದ ನಷ್ಟವನ್ನು ಅನುಭವಿಸಿದಾಗ ಅವರಿಗೆ ಆರ್ಥಿಕ ರಕ್ಷಣೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಹವಾಮಾನ ಪರಿಸ್ಥಿತಿಗಳು ಕಳೆದ ಕೆಲವು ವರ್ಷಗಳಿಂದ ಅಸ್ಥಿರವಾಗಿರುವುದರಿಂದ ಈ ರೀತಿಯ ವಿಮಾ ಯೋಜನೆಗಳು ರೈತರಿಗೆ ಭದ್ರತೆಯ ಜಾಲದಂತೆ ಕಾರ್ಯನಿರ್ವಹಿಸುತ್ತವೆ. ಆಪತ್ತಿಗೆ ನೆರವಾಗುತ್ತವೆ.

ಇದನ್ನೂ ಓದಿ: Haveri Hori Habba- ಹೋರಿ ಹಬ್ಬಕ್ಕೆ ಬ್ರೇಕ್ | ಬ್ಯಾನ್ ಆಗುತ್ತಾ ಕ್ರೇಜಿ ಹಬ್ಬ? | ಹಾವೇರಿ ಜಿಲ್ಲಾಡಳಿತದ ಷರತ್ತುಗಳೇನು?
ಈ ಬಾರಿ ವಿಮೆಗೆ ಒಳಗೊಂಡಿರುವ ಬೆಳೆಗಳು
ಈ ಬಾರಿ ಹಿಂಗಾರು ಹಂಗಾಮಿಗೆ ಜಿಲ್ಲೆಯಾದ್ಯಂತ ಒಟ್ಟು 11 ಬೆಳೆಗಳನ್ನು ಮತ್ತು ಬೇಸಿಗೆ ಕಾಲಲ್ಲಿ 03 ಪ್ರಮುಖ ಬೆಳೆಗಳನ್ನು ಒಳಪಡಿಸಲಾಗಿದೆ. ವಿಮೆಗೆ ಒಳಪಟ್ಟ ಬೆಳೆಗಳ ವಿವರ ಹೀಗಿದೆ:
ಹಿಂಗಾರು ಹಂಗಾಮು ಬೆಳೆಗಳು
- ಜೋಳ: ನೀರಾವರಿ, ಮಳೆ ಆಶ್ರಿತ
- ಮುಸುಕಿನ ಜೋಳ: ನೀರಾವರಿ
- ಗೋಧಿ: ಮಳೆ ಆಶ್ರಿತ
- ಕಡಲೆ: ಮಳೆ ಆಶ್ರಿತ, ನೀರಾವರಿ
- ಉದ್ದು: ಮಳೆ ಆಶ್ರಿತ
- ಹುರುಳಿ: ಮಳೆ ಆಶ್ರಿತ
- ಹೆಸರು: ಮಳೆ ಆಶ್ರಿತ
- ಸೂರ್ಯಕಾಂತಿ: ಮಳೆ ಆಶ್ರಿತ, ನೀರಾವರಿ
- ಕುಸುಬೆ: ಮಳೆ ಆಶ್ರಿತ
- ಈರುಳ್ಳಿ: ನೀರಾವರಿ
- ಟೊಮ್ಯಾಟೊ: ನೀರಾವರಿ
ಬೇಸಿಗೆ ಹಂಗಾಮು ಬೆಳೆಗಳು
- ಭತ್ತ: ನೀರಾವರಿ
- ಶೇಂಗಾ (ನೆಲಗಡಲೆ): ನೀರಾವರಿ
- ಸೂರ್ಯಕಾಂತಿ: ನೀರಾವರಿ
ಇದನ್ನೂ ಓದಿ: Honge Krushi- ಹಾವೇರಿ ರೈತರಿಗೆ ವರದಾನವಾಗುವ ಹೊಂಗೆ ಕೃಷಿ | ರಾಣೇಬೆನ್ನೂರು ಹನುಮನಮಟ್ಟಿ ಜೈವಿಕ ಇಂಧನ ಕೇಂದ್ರದ ಮಾಹಿತಿ
ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸುವ ಕೊನೆಯ ದಿನ
ವಿಮೆ ಪಡೆಯಲು ರೈತರು ತಮ್ಮ ತಮ್ಮ ಬೆಳೆಗಳಿಗೆ ಸಂಬಂಧಿಸಿದ ಘೋಷಣೆಯನ್ನು ನಿಗದಿತ ದಿನಾಂಕದೊಳಗೆ ಬ್ಯಾಂಕುಗಳಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಮಳೆ ಆಶ್ರಿತ – ನೀರಾವರಿ ಜೋಳ, ಈರುಳ್ಳಿ, ಕುಸುಬೆ, ಟೊಮ್ಯಾಟೊ ಹಾಗೂ ಸೂರ್ಯಕಾಂತಿಯ ಮಳೆ ಆಶ್ರಿತ ವಿಭಾಗಕ್ಕೆ ಡಿಸೆಂಬರ್ 1, 2025 ಕೊನೆಯ ದಿನವಾಗಿದೆ.
ಇದೇ ರೀತಿಯಲ್ಲಿ ಸೂರ್ಯಕಾಂತಿ (ನೀರಾವರಿ) ಮತ್ತು ಗೋಧಿ (ಮಳೆ ಆಶ್ರಿತ) ಬೆಳೆಗಳಿಗೆ ಡಿಸೆಂಬರ್ 15 ಕೊನೆಯ ದಿನವಾಗಿದ್ದು; ಉದ್ದು, ಹೆಸರು, ಹುರುಳಿ ಮತ್ತು ಮುಸುಕಿನ ಜೋಳ ಬೆಳೆಗಳಿಗೆ ಡಿಸೆಂಬರ್ 31 ಕೊನೆಯ ದಿನಾಂಕ ನಿಗದಿಯಾಗಿದೆ.
ಬೇಸಿಗೆ ಹಂಗಾಮಿನಲ್ಲಿ ಶೇಂಗಾ, ಭತ್ತ ಮತ್ತು ಸೂರ್ಯಕಾಂತಿ (ನೀರಾವರಿ) ಬೆಳೆಗಳನ್ನು ವಿಮೆಗೆ ನೋಂದಾಯಿಸಲು ರೈತರು ಫೆಬ್ರವರಿ 27, 2026ರ ಒಳಗೆ ಬ್ಯಾಂಕುಗಳಿಗೆ ಘೋಷಣೆಯನ್ನು ಸಲ್ಲಿಸಬೇಕಾಗಿದೆ.
ಬೆಳೆ ಸಾಲ ಪಡೆದುಕೊಳ್ಳದ ರೈತರಿಗೆ ಅಗತ್ಯ ದಾಖಲೆಗಳು
ಸಾಲವಿಲ್ಲದೆ ವಿಮೆಗೆ ನೋಂದಣಿ ಮಾಡಲು ಬಯಸುವ ರೈತರು ಕೆಳಗಿನ ದಾಖಲೆಗಳನ್ನು ಅರ್ಜಿಗೆ ಜತೆಯಾಗಿ ಸಲ್ಲಿಸಬೇಕು:
- ಪಹಣಿ / ಆರ್ಟಿ (ಖಖಿಅ)
- ಕಂದಾಯ ರಶೀದಿ
- ಖಾತೆ ಪುಸ್ತಕ / ಹಕ್ಕುಪತ್ರ
- ಬ್ಯಾಂಕ್ ಪಾಸ್ಬುಕ್ ಪ್ರತಿಯನ್ನು
- ಆಧಾರ್ ಕಾರ್ಡ್ ಪ್ರತಿಯನ್ನು
ಯೋಜನೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ರೈತರೂ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳುವುದು ಕಡ್ಡಾಯ.
ಎಲ್ಲಿ ನೋಂದಣಿ ಮಾಡಬಹುದು?
ರೈತರು ಬ್ಯಾಂಕುಗಳು, ಸಾಮಾನ್ಯ ಸೇವಾ ಕೇಂದ್ರಗಳು (CSC) ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳ ಮೂಲಕ ವಿಮೆ ನೋಂದಣಿ ಮಾಡಿಸಿಕೊಳ್ಳಬಹುದು.
ಸಮೀಪದ ರೈತ ಸಂಪರ್ಕ ಕೇಂದ್ರ, ಕೃಷಿ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಸಿಬ್ಬಂದಿ ಇವರಿಂದ ಸಹಾಯ ಮತ್ತು ಮಾಹಿತಿ ಪಡೆಯಬಹುದು.
ಯೋಜನೆಯ ಮಹತ್ವ
ಬೆಳೆ ವಿಮೆ ಯೋಜನೆ ರೈತರ ಆರ್ಥಿಕ ಭದ್ರತೆಗೆ ಪ್ರಮುಖ ಕಂಬವಾಗಿದ್ದು, ಮಳೆ ಅಸ್ಥಿರತೆ, ನೀರಾವರಿ ಸಮಸ್ಯೆ, ಬೆಳೆ ರೋಗ, ಅತಿವೃಷ್ಟಿ ಮುಂತಾದ ಕಾರಣಗಳಿಂದ ಉಂಟಾಗುವ ದೊಡ್ಡ ನಷ್ಟದಿಂದ ರೈತರನ್ನು ರಕ್ಷಿಸುತ್ತದೆ.
ವಿಮೆ ಪಡೆದಿರುವ ರೈತರಿಗೆ ಹಾನಿ ಸಂಭವಿಸಿದಾಗ ಪರಿಹಾರ ನೀಡಲಾಗುವುದರಿಂದ ಮುಂದಿನ ಹಂಗಾಮಿನ ಕೃಷಿಯನ್ನು ಮುಂದುವರಿಸಲು ಅಗತ್ಯ ವಿಶ್ವಾಸ ದೊರೆಯುತ್ತದೆ.

ಹಾವೇರಿ ಜಿಲ್ಲೆಯ ಸುದ್ದಿ, ಸರ್ಕಾರಿ ಯೋಜನೆಗಳು, ಅರ್ಜಿ ಪ್ರಕ್ರಿಯೆಗಳು, ರೈತರ ಉಪಯುಕ್ತ ಮಾಹಿತಿ ಮತ್ತು ಸ್ಥಳೀಯ ಅಪ್ಡೇಟ್ಗಳನ್ನು ನಿಖರ ಹಾಗೂ ಸರಳವಾಗಿ ಹಂಚುವ ಜಾಲತಾಣ
2 thoughts on “Haveri Hingaru Bele Vime – ಹಾವೇರಿ ಜಿಲ್ಲೆಯ ರೈತರಿಂದ ಹಿಂಗಾರು ಬೆಳೆವಿಮೆ ನೋಂದಣಿಗೆ ಅರ್ಜಿ ಆಹ್ವಾನ”